ಸ್ವಾನ್ವೇಷಣೆಯಲಿ ಎನಗೇ ತಿಳಿವಿರದ ಎನ್ನೊಳಗಿನ ಎನ್ನಾವಿಷ್ಕಾರಕೆ ನಿಮಿತ್ತವಾದ ಸಾದಿ.....
ಎನ್ನಂತಾರ್ಯದೊಳಗಣ ಸಾಸಿರ ಭಾವಗಳ ಅಭಿವ್ಯಕ್ತಿಗೆ ಭಿತ್ತಿಯಾದ ಪಥ....
ಇಂದೇಕೋ ಬರಡುಭೂಮಿ ಉತ್ಸವಮೂರ್ತಿಯಿರದೇ ಬರಿದಾದ ರಥ....
ಮನದೊಳಗಣ ಕಡುಮೌನ ಭರಿಸಲಸಾಧ್ಯ ಈ ಭಾವಾಂತರ್ಧಾನ
ಧಾವಂತದ ಜಗದೊಳು ಗಳಿಕೆಯ ಲೆಕ್ಕಾಚಾರವೇ ಪ್ರಧಾನ
ಮೌನದಿ ನಿಟ್ಟುಸಿರಿಡುವ ಮನದ ಅಳಲ ಕೇಳಲು ಯಾರಿಗಿದೆ ವ್ಯವಧಾನ?
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ