ಶುಕ್ರವಾರ, ಅಕ್ಟೋಬರ್ 2, 2020

ಅವಲೋಕನ

ಪ್ರಕಟವಾಗದೇ ಉಳಿದ ಅವ್ಯಕ್ತ ಭಾವಗಳಿಗೆ ಮನವೇ
ತುರಂಗ 

ಜಗವೇ ಮರೆತ ಪುಟಗಳ ನಡುವೆಲ್ಲೋ ಅವುಗಳ ಮೌನ ತರಂಗ

ಶುಷ್ಕ ಸಂಬಂಧಗಳು ಕಿಸುರಿನೊರೆಯಾಗಿರೆ ನುಡಿಗಳಿಂದಲೇ ಹನನ ಭಾವಗಳ ಅವಸಾನ

ಗಂಟಲ ಸೆರೆಯುಬ್ಬಿಸುವ ನೀರವ ಏಕಾಂತದೊಳಗೊಂದು ಆತ್ಮಾನುಸಂಧಾನ 

ಬರಡಾಗಿದೆ ಅಂತರಂಗದ ಒರತೆ ಬಿರುಕೊಡೆದ ಮನೋಭೂಮಿಯೊಳು ಭಾವಗಳ ದಹನ

ಸಂವೇದನಾರಹಿತ ಸ್ತರ ತಲುಪಿದೆ ಹೃದಯ ಆಗಬೇಕಿದೆ ಚಿತ್ತವೃತ್ತಿಯ ಪುನರಾವಲೋಕನ

ಘಾಸಿಗೊಂಡ ಮನವೇ.... ಸಾಕಿನ್ನು ಭಾವಾವಲಂಬನೆಯ ಹಂಗಿನ ಅನುಭವ

ನಡೆಯೆ ಅಂತರಾತ್ಮನ ದಿವ್ಯ ಚಿಂತನಾಪಥದೊಳು ಅದುವೇ ಸಾಕ್ಷಾತ್ಕಾರದ ಅನುಭಾವ