ಸೋಮವಾರ, ಸೆಪ್ಟೆಂಬರ್ 5, 2022

ಲಹರಿ ೩

"ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ" ಇಲ್ಲಿ 'ಗುಲಾಮ' ಎನ್ನುವ ಪದಕ್ಕೆ ದಾಸರು ಕಲ್ಪಿಸಿರುವ ಅರ್ಥ ದಾಸ್ಯತ್ವದ್ದಲ್ಲ. 'ಗುರು' ಎಂಬುದು ಗುರುತರವಾದ ಜವಾಬ್ದಾರಿ. ಶಿಷ್ಯವೃಂದದಿಂದ ಅಭಿವಂದನೆ ಸ್ವೀಕರಿಸಿ, ಅವರುಗಳು ಹಾಕುವ ಸಂದೇಶಗಳ ಸ್ಕ್ರೀನ್ ಶಾಟ್ ತೆಗೆದು ವಾಟ್ಸಾಪ್ ಸ್ಟೇಟಸ್ ಹಂಚಿಕೊಳ್ಳುವಲ್ಲಿಗೆ ಮುಗಿಯುವುದಲ್ಲ ಗುರುವೆಂಬ ಪದವಿ. ಇರುವ ಅರೆಬರೆ ಜ್ಞಾನವನ್ನೇ ಅತಿರೇಕದಲ್ಲಿ ಪ್ರದರ್ಶಿಸುತ್ತಾ, ತಾನೇ ಸರ್ವಜ್ಞನೆಂಬ ಅಹಮ್ಮಿಕೆಯಲ್ಲಿ ಮೆರೆಯುವವರು ಸದಾ ನೆನಪಿನಲ್ಲಿಡಬೇಕಾದ ಸಂಗತಿ......... ಗುರುವಿನ ಕಲಿಕೆ ಮಣ್ಣಿಗೆ ಸೇರುವ ತನಕ ನಿರಂತರ. ತನ್ನ ಕಲಿಕೆಗೆ ಪೂರ್ಣವಿರಾಮ ಹಾಕಿಕೊಂಡ ಗುರು ವಿದ್ಯಾರ್ಥಿಯ ಭವಿಷ್ಯ ರೂಪಿಸಲಾರ. ಗುರುವಿನ ಅಹಮ್ಮಿಕೆ, ಗುರುವಿನ ಒಂದು ಸಣ್ಣ ತಪ್ಪು ಶಿಷ್ಯನ ಉಜ್ವಲ ಭವಿತವ್ಯವನ್ನು ಕಸಿಯದಿರಲಿ. ಶಿಷ್ಯಂದಿರ ಸಂದೇಶಗಳನ್ನು, ಹೊಗಳಿಕೆಗಳನ್ನು ಪ್ರದರ್ಶಿಸುವಾಗ ಇರುವಷ್ಟೇ ಹೆಮ್ಮೆ ಕರ್ತವ್ಯಕ್ಕೆ ನ್ಯಾಯ ಒದಗಿಸುವಾಗಲೂ ಇರಲಿ. ಕರ್ತವ್ಯಕ್ಕೆ ವಿಮುಖರಾಗಿ ಹೊಗಳಿಕೆಗೆ ಮಾತ್ರ ಸುಮುಖರಾಗುವ ಗುರುಗಳಿಗೆ ಧಿಕ್ಕಾರವಿರಲಿ.......

ಹೊಗಳಿಕೆಯಲ್ಲೇ ಮೈಮರೆಯದ, ಕರ್ತವ್ಯದಿಂದ ವಿಮುಖರಾಗದ ಎಲ್ಲಾ ಗುರುಗಳಿಗೂ ಶಿಕ್ಷಕರ ದಿನಾಚರಣೆಯ ಶುಭಾಶಯಗಳು. 

#ಅರಿಯೋಗುರುವೇಶಿಷ್ಯನಂತರಂಗವಾ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ